ಪಿಂಕ್ ಸಿನೆಮಾ : ಹೆಣ್ಣು : ಸೀತೆ, ಸಾವಿತ್ರಿ ,ರಾಧೇ , ಪಾಂಚಾಲಿ , ದೇವಕಿ , ಯಶೋಧೆ ,
ಶರ್ಮಿಷ್ಠೆ , ದೇವಯಾನಿ ; ಎಲ್ಲವೂ ಆಗಬಲ್ಲಳು. ಆದರೆ ಆಯ್ಕೆಯ ಸ್ವಾತಂತ್ರ್ಯ
ಅವಳದ್ದಾಗಿರಬೇಕು. ಪಾತ್ರಗಳನ್ನು ಹೇರುವ ಅಧಿಕಾರ ಯಾರಿಗೂ ಇಲ್ಲ , ಇರಬಾರದು. ಅಂತಹ
ಸಮಾಜ ಉಳಿಯಲಾರದು , ಉಳಿಯಬಾರದು.
ನಾ ಪ್ರಶ್ನೆಗಳ ಗೂಡು ತೊರೆದಾಗಿದೆ
ಆದರೂ ಆಗಾಗ ಅವರು ಕೇಳುತ್ತಾರೆ,
ಎಲ್ಲಿದ್ದೆ ? ಎಲ್ಲಿಗೆ ಪಯಣ ?
ಮಡಿಲಿನಿಂದ ಮಣ್ಣಿನವರೆಗೆ
ತೀರದಿಂದ ಕಡಲಿನವರೆಗೆ
ಬಾನಿನಿಂದ ಬಯಲಿನವರೆಗೆ
ಎಣಿಕೆ ಬಾರದ ಹೆಡ್ಡನ
ಲೆಖ್ಕದಲ್ಲಿ ಗಳಿಕೆಯಾವುದು ?
ನೀವೇ ಹೇಳಿ,ಎಲ್ಲ ಬಲ್ಲವರು !
ಒಲವಿಗೂ ವ್ಯಾಮೋಹಕ್ಕೂ
ನಂಬಿಕೆಗೂ ನೀರೀಕ್ಷೆಗೂ
ಆಸೆಗೂ ಕನಸಿಗೂ
ಕಡಲ ಉಪ್ಪಿಗೂ ನೀರಿಗೂ
ಇರುವಷ್ಟೇ ಅಂತರ
ತಿಳಿಯಲಿಲ್ಲ , ನಾನಳಿಯಲಿಲ್ಲ !
ಉತ್ತರಿಸದೇ , ಉಸಿರೆತ್ತದೇ
ಹೊತ್ತು ಮುನ್ನಡೆದೇ(?) ನಡೆದೇ
ಗೋಳದಲ್ಲಿ ಬಂಧಿಯಾದ
ಮೂರು ಮುಳ್ಳುಗಳನ್ನ
ಮುಳ್ಳುಗಳಿಗ್ಯಾರ ಹಂಗು ?
ಚಲಿಸುತ್ತವೆ , ಚುಚ್ಚುತ್ತವೆ !
ಎಂದೋ , ಒಳಗಿಂದೊಂದು ಶಾಂತ
ದನಿ ಕೇಳಿತು, ಯಾವುದಾದರೇನು
ಹಾದಿ,ಹೊತ್ತು ನಡೆ ಗೋಳಕವ
ಸುತ್ತು ತಿರುಗುವ ಬಾಲನಂತೆ
ಮಾಯವಾಗಲಿ ಮುಳ್ಳು ಮುಂದಿನಿಂದ ,
ಬಂದೇ ಬರುವುದು ನೆರಳು ಹಿಂದಿನಿಂದ !
ಗೋಳಕದ ಆದಿ ಅಂತ್ಯಗಳೆರಡು ಉಸಿರಿನಲ್ಲಿ
ಎಣಿಕೆ ಮಾಡಲಿ ಬೇಡ ಮುಳ್ಳಿನಲ್ಲಿ !
ಈ ಸಾಲುಗಳು ಮೂಡಿದ್ದು ಅವಧಿಯಲ್ಲಿನ ಚಿತ್ರಕ್ಕೊಂದು ಕವಿತೆ ಸ್ಪರ್ಧೆಗಾಗಿ ಆದರೆ ಕಳಿಸಲೋ ಬೇಡವೋ ಎಂಬ ಪ್ರಶ್ನೆಗೆ ಉತ್ತರ ದೊರೆಯುವ ಮುನ್ನ ತೀರ್ಪುಗಾರರಾಗಿದ್ದ ಗೋಪಾಲ ವಾಜಪೇಯಿಯವರು ನಮ್ಮನಗಲಿದರು. ಹೌದು , ಇಲ್ಲ ಎಂಬ ಎರಡೇ ಆಯ್ಕೆಗಳನಿಟ್ಟಾಗ ಬದುಕು ತನ್ನದೇ ಆದ ಬೇರೆ ಆಯ್ಕೆ ಮಾಡಿಕೊಂಡಿತ್ತು.
ಅವರೊಡನೆ ನನಗಷ್ಟು ಒಡನಾಟವಿರಲಿಲ್ಲ, ಭೇಟಿಯಾಗಿದ್ದು ಎರಡೇ ಬಾರಿ ಆದರೂ ಅಂತಃಕರಣವೊಂದು ಮರೆಯಾದ ನೋವು ಕಾಡುತ್ತಿರುವುದು ಸತ್ಯ.
![]() |
| ಚಿತ್ರಕೃಪೆ : ಅಂತರ್ಜಾಲ |
ನಾ ಪ್ರಶ್ನೆಗಳ ಗೂಡು ತೊರೆದಾಗಿದೆ
ಆದರೂ ಆಗಾಗ ಅವರು ಕೇಳುತ್ತಾರೆ,
ಎಲ್ಲಿದ್ದೆ ? ಎಲ್ಲಿಗೆ ಪಯಣ ?
ಮಡಿಲಿನಿಂದ ಮಣ್ಣಿನವರೆಗೆ
ತೀರದಿಂದ ಕಡಲಿನವರೆಗೆ
ಬಾನಿನಿಂದ ಬಯಲಿನವರೆಗೆ
ಎಣಿಕೆ ಬಾರದ ಹೆಡ್ಡನ
ಲೆಖ್ಕದಲ್ಲಿ ಗಳಿಕೆಯಾವುದು ?
ನೀವೇ ಹೇಳಿ,ಎಲ್ಲ ಬಲ್ಲವರು !
ಒಲವಿಗೂ ವ್ಯಾಮೋಹಕ್ಕೂ
ನಂಬಿಕೆಗೂ ನೀರೀಕ್ಷೆಗೂ
ಆಸೆಗೂ ಕನಸಿಗೂ
ಕಡಲ ಉಪ್ಪಿಗೂ ನೀರಿಗೂ
ಇರುವಷ್ಟೇ ಅಂತರ
ತಿಳಿಯಲಿಲ್ಲ , ನಾನಳಿಯಲಿಲ್ಲ !
ಉತ್ತರಿಸದೇ , ಉಸಿರೆತ್ತದೇ
ಹೊತ್ತು ಮುನ್ನಡೆದೇ(?) ನಡೆದೇ
ಗೋಳದಲ್ಲಿ ಬಂಧಿಯಾದ
ಮೂರು ಮುಳ್ಳುಗಳನ್ನ
ಮುಳ್ಳುಗಳಿಗ್ಯಾರ ಹಂಗು ?
ಚಲಿಸುತ್ತವೆ , ಚುಚ್ಚುತ್ತವೆ !
ಎಂದೋ , ಒಳಗಿಂದೊಂದು ಶಾಂತ
ದನಿ ಕೇಳಿತು, ಯಾವುದಾದರೇನು
ಹಾದಿ,ಹೊತ್ತು ನಡೆ ಗೋಳಕವ
ಸುತ್ತು ತಿರುಗುವ ಬಾಲನಂತೆ
ಮಾಯವಾಗಲಿ ಮುಳ್ಳು ಮುಂದಿನಿಂದ ,
ಬಂದೇ ಬರುವುದು ನೆರಳು ಹಿಂದಿನಿಂದ !
ಗೋಳಕದ ಆದಿ ಅಂತ್ಯಗಳೆರಡು ಉಸಿರಿನಲ್ಲಿ
ಎಣಿಕೆ ಮಾಡಲಿ ಬೇಡ ಮುಳ್ಳಿನಲ್ಲಿ !
ಈ ಸಾಲುಗಳು ಮೂಡಿದ್ದು ಅವಧಿಯಲ್ಲಿನ ಚಿತ್ರಕ್ಕೊಂದು ಕವಿತೆ ಸ್ಪರ್ಧೆಗಾಗಿ ಆದರೆ ಕಳಿಸಲೋ ಬೇಡವೋ ಎಂಬ ಪ್ರಶ್ನೆಗೆ ಉತ್ತರ ದೊರೆಯುವ ಮುನ್ನ ತೀರ್ಪುಗಾರರಾಗಿದ್ದ ಗೋಪಾಲ ವಾಜಪೇಯಿಯವರು ನಮ್ಮನಗಲಿದರು. ಹೌದು , ಇಲ್ಲ ಎಂಬ ಎರಡೇ ಆಯ್ಕೆಗಳನಿಟ್ಟಾಗ ಬದುಕು ತನ್ನದೇ ಆದ ಬೇರೆ ಆಯ್ಕೆ ಮಾಡಿಕೊಂಡಿತ್ತು.
ಅವರೊಡನೆ ನನಗಷ್ಟು ಒಡನಾಟವಿರಲಿಲ್ಲ, ಭೇಟಿಯಾಗಿದ್ದು ಎರಡೇ ಬಾರಿ ಆದರೂ ಅಂತಃಕರಣವೊಂದು ಮರೆಯಾದ ನೋವು ಕಾಡುತ್ತಿರುವುದು ಸತ್ಯ.

ಸ್ವರ್ಣಾ, ನಿಮ್ಮ ಕವನ ಈ ಚಿತ್ರಕ್ಕೆ ತುಂಬ ಸಮರ್ಪಕವಾಗಿದೆ. ವಾಜಪೇಯಿಯವರು ತೀರ್ಪು ಕೊಡುವ ಮುನ್ನವೆ, ಅವರಿಗೆ ಮತ್ತೊಂದು ತೀರ್ಪು ಕಾಯ್ದಿತ್ತು. ಇದ್ದಿದ್ದರೆ, ನಿಮಗೇ ಬಹುಶಃ ಮೊದಲ ಬಹುಮಾನ ದೊರೆಯುತ್ತಿತ್ತು.
ReplyDeleteವಂದನೆಗಳು ಕಾಕಾ.ನಿಮ್ಮ ಪ್ರೀತಿಗೆ ಋಣಿ
Deleteಹೊತ್ತು ನಡೆ ಗೋಳಕವ
ReplyDeleteಸುತ್ತು ತಿರುಗುವ ಬಾಲನಂತೆ
ಮಾಯವಾಗಲಿ ಮುಳ್ಳು ಮುಂದಿನಿಂದ ,
ಬಂದೇ ಬರುವುದು ನೆರಳು ಹಿಂದಿನಿಂದ !
ಈ ಸಾಲುಗಳು ತುಂಬಾ ಕಾಡಿದವು
ನಮ್ಮ ಗುರುಗಳು ಶಬ್ದಮಾಡದೆ ಅನೇಕರ ಸ್ಪೂರ್ತಿಗೆ ಸ್ಪೂರ್ತಿಯಾಗಿ ನಿಂತದ್ದು ಅವರ ಶಕ್ತಿ
ಕಂಡು ಕಾಣದಂತೆ ಸಾಗಿರುವ ಈ ಕವಿತೆಯೊಳಗಿನ ಶಕ್ತಿ.. ಪೂರ್ಣ ಕವಿತೆ ಓದಿದ ಮೇಲೆ ನಮ್ಮನ್ನು ಆವರಿಸಿಕೊಳ್ಳುತ್ತದೆ
ಕವನ ಮತ್ತು ಅದರ ಹಿಂದಿನ ಭಾವ ಜೊತೆಯಲ್ಲಿ ಗುರುಗಳು ನೋಡಬೇಕಿತ್ತು ಈ ಕವನ ಎನ್ನುವ ಆ ಭಾವ...
ಗುರುಗಳಿಗೆ ಒಂದು ನಮನ
ಹೌದು ಶ್ರೀಕಾಂತ್ ಭಾಯ್ ...ವಂದನೆಗಳು
Delete