Monday, September 26, 2011

ಬಲಿ

ಭೀಮ : ದ್ರೌಪದಿ, ಸುಖವಾಗಿದ್ದಿಯ?
ದೌಪದಿ: ಧರ್ಮರಾಯನ ಹೆಂಡತಿಗೂ ಸುಖಕ್ಕೂ ಸಂಭಂದವಿಲ್ಲ

ಬನ್ನಂಜೆ ಯವರ ಯಾವೊದೋ ಪ್ರವಚನದಲ್ಲಿ ಮೇಲಿನ ಮಾತುಗಳನ್ನು
ಕೇಳಿದಾಗ ಅನಿಸಿತ್ತು, ಒಳ್ಳೆತನ ಬಲಿದಾನಗಳನ್ನ ಬೇಡುತ್ತದೆ. ಯಾರದೋ ಮಹತ್ತರ
ಸಾಧನೆಗಾಗಿ , ಆದರ್ಶಕ್ಕಾಗಿ ಇನ್ಯಾರದೋ ಬಲಿ. ತಮಾಷೆ ಎಂದರೆ ಲೋಕ ನೆನಪಿಡುವುದು
ಸಾಧನೆಗಳನ್ನ, ಆದರ್ಶಗಳನ್ನ.

ಸೀತೆಯ ಕಣ್ಣಿರಲ್ಲಿ ರಾಮನ ಅಸ್ತಿತ್ವ
ದ್ರೌಪದಿಯ ಬದುಕು ಧರ್ಮಪರತೆ ಯ ಸಾಕ್ಷಿ
ದಮಯಂತಿಯ ವಿರಹದಲ್ಲಿ ನಳನ ಸಾರಥ್ಯ
ಊರ್ಮಿಳೆ ಕಳೆದು ಬಹು ಕಾಲವಾಯಿತು.
ಗುಡಿಯಲ್ಲೂ ಲಕ್ಷ್ಮಣನೊಂದಿಗೆ ಅವಳಿಗೆ ಸ್ಥಾನ ವಿಲ್ಲ !

2 comments: