ಆಕಾಶ ಮತ್ತು ಸಮುದ್ರ, ನದಿ, ಕೆರೆಗಳಿಗೆ ಸಂತೋಷ ಮತ್ತು ದುಃಖ ಎರಡಕ್ಕೂ
ಸಲ್ಲುವ ಗುಣಗಳಿವೆ. ಅವನ ನಗೆಯನ್ನ ನೆನಪಿಸುತಿದ್ದ ಕೆರೆ , ಅದರ ಸುತ್ತಲಿನ ಹಸಿರು, ಅಲ್ಲಿ ಬರುವ ಗೋಪಾಲರು ,
ಬೆಳೆದಿದ್ದ ಥರಾವರಿ ಬೇಲಿಯ ಹೂಗಳು, ಈಗ ಅವನ ಕಣ್ಣಲಿದ್ದ ನೋವೆಲ್ಲವನ್ನ ಬಚ್ಚಿಟ್ಟುಕೊಂಡಂತೆ ಕಾಣುತ್ತಿದ್ದವು.
ನಂತರದ ಅವನ ರಿಸಲ್ಟ್ಸ್ ನಂಗೆ ತಿಳಿಯಲಿಲ್ಲ. ತಿಳಿದುಕೊಳ್ಳುವ ಪ್ರಯತ್ನವನ್ನೂ ಮಾಡಲಿಲ್ಲ.
ಅವನ ಮನೆಯ ಫೋನ್ ನಂಬರ್ ಹುಡುಕುವುದು ಕಷ್ಟವಲ್ಲ, ಆದರೆ ಯಾವ ಸಂಬಧದ ಎಳೆ ಹಿಡಿಯುವುದು ?
ವರ್ಷಕ್ಕೊ , ಆರು ತಿಂಗಳಿಗೋ ನಡೆವ ಮೂರ್ನಾಲ್ಕು ನಿಮಿಷಗಳ ಭೇಟಿಗೆ ಯಾವ ಹೆಸರನಿಡುವುದು?
ತನ್ನ ಸೋಲನ್ನ ಅವ ನನ್ನೊಂದಿಗೆ ಹಂಚಿಕೊಂಡಿದ್ದಾನೆ ಅಂದರೆ ಕನಿಷ್ಠ ಫ್ರೆಂಡ್ ಅಂತನಾದ್ರೂ ಅಂದ್ಕೊಂಡಿರ್ಬೇಕು
ಅಂತ ಒಮ್ಮೆ ಅನಿಸಿದರೆ ಮತ್ತೊಮ್ಮೆ ಇಲ್ಲೆಲ್ಲೋ ಹೋಗುತ್ತಿದವ ಬಂದ, ತಿಳಿದದ್ದು ಮಾತಾಡಿದ ಹೋದ , ಸೋತೆ ಅಂತ ಹೇಳಿ ಹೊರಟೆ ಹೋದನಲ್ಲ ಸಂಬಧವಿದ್ದಿದ್ದರೆ ಹಾಗೆ ಹೋಗುತ್ತಿದ್ದನೇ ? ಅಂತ ಪೂರ್ತಿ ವಿರುಧ್ಧ ದಿಕ್ಕಿನಲ್ಲಿ ಮನಸು ಓಡುತ್ತಿತ್ತು.
ಕನಸೊಂದು ಈಡೇರದೆಂಬ ಸತ್ಯ ಬುಧ್ಧಿಗಿಂತಲೂ ಮೊದಲು ಮನಸ್ಸಿಗೆ ತಿಳಿಯುತ್ತದೆ.
ಜೊತೆಗೇ ಬೆಳೆದ ಅವನು ಕನಸೇ?
ಕೆಲವೊಮ್ಮೆ ಮನಸು ಅತ್ತ ಸ್ನೇಹವಲ್ಲದ ಇತ್ತ ಪ್ರೇಮವಲ್ಲದ ಒಂದು ನಡುವಿನ ಸಂಬಂಧವನ್ನ ಹುಡುಕುತಿರುತ್ತೆ .
ಹುಡುಗರಿಗೆ ತಾಯಿ, ಅಕ್ಕ -ತಂಗಿ , ಗೆಳತಿ ಎಲ್ಲವೂ ಆಗಬಲ್ಲ ಒಂದು ಬಂಧ ಆಪ್ತವಾಗತ್ತೆ.
ಅಂಥ ಒಂದು ಬಂಧವನ್ನ ಅವ ಅರಸಿದ್ದನೆ ?
ಪದವಿಗೆ ಬರುವ ಹೊತ್ತಿಗೆ ಒಬ್ಬ ಸಂಗಾತಿ ಇರುವುದು ಅಪರೂಪವಲ್ಲದಿದ್ದರೂ ಸಾಮಾನ್ಯವೂ ಆಗಿರದ ಕಾಲವದು. ಗೆಳತಿಯರು ಅವರ ಬಾಯ್ ಫ್ರೆಂಡ್ಗಳ ಬಗ್ಗೆ ಹೇಳಿದ್ದು ಕೇಳಿದಾಗ ನನಗೆ ಇವನ ನೆನಪಾಗುತ್ತಿರಲಿಲ್ಲ.
ಹಾಗಾದರೆ, ಹೆಣ್ಣಾದ ನಾನು ಹುಡುಕಿದ್ದು ಏನನ್ನು ? ಯಾವ ಹೆಸರಲ್ಲವನ ಕೂಗಲಿ?
ದಂಡಿಸಿ ಯಶೋಧೆಯಾಗಲಾರೆ , ಸಾಧಿಸಿ ಭಾಮೆಯಾಗಲಾರೆ .
ಮೀರಾ, ರಾಧೆಯರು ಕಥೆಯಲ್ಲಿ ಮಾತ್ರ ಚೆನ್ನ.
"ಯಶೋದನು ಕಾನುರ ನಿನ್ನು ದಂಡಿಂಚ
ಸತ್ಯನು ಕಾನುರ ನಿನ್ನು ಸಾದಿಂಚ
ಎವರು ನುವ್ವನಿ ನನ್ನು ಅಡಗಕು "
ಸಲ್ಲುವ ಗುಣಗಳಿವೆ. ಅವನ ನಗೆಯನ್ನ ನೆನಪಿಸುತಿದ್ದ ಕೆರೆ , ಅದರ ಸುತ್ತಲಿನ ಹಸಿರು, ಅಲ್ಲಿ ಬರುವ ಗೋಪಾಲರು ,
ಬೆಳೆದಿದ್ದ ಥರಾವರಿ ಬೇಲಿಯ ಹೂಗಳು, ಈಗ ಅವನ ಕಣ್ಣಲಿದ್ದ ನೋವೆಲ್ಲವನ್ನ ಬಚ್ಚಿಟ್ಟುಕೊಂಡಂತೆ ಕಾಣುತ್ತಿದ್ದವು.
ನಂತರದ ಅವನ ರಿಸಲ್ಟ್ಸ್ ನಂಗೆ ತಿಳಿಯಲಿಲ್ಲ. ತಿಳಿದುಕೊಳ್ಳುವ ಪ್ರಯತ್ನವನ್ನೂ ಮಾಡಲಿಲ್ಲ.
ಅವನ ಮನೆಯ ಫೋನ್ ನಂಬರ್ ಹುಡುಕುವುದು ಕಷ್ಟವಲ್ಲ, ಆದರೆ ಯಾವ ಸಂಬಧದ ಎಳೆ ಹಿಡಿಯುವುದು ?
ವರ್ಷಕ್ಕೊ , ಆರು ತಿಂಗಳಿಗೋ ನಡೆವ ಮೂರ್ನಾಲ್ಕು ನಿಮಿಷಗಳ ಭೇಟಿಗೆ ಯಾವ ಹೆಸರನಿಡುವುದು?
ತನ್ನ ಸೋಲನ್ನ ಅವ ನನ್ನೊಂದಿಗೆ ಹಂಚಿಕೊಂಡಿದ್ದಾನೆ ಅಂದರೆ ಕನಿಷ್ಠ ಫ್ರೆಂಡ್ ಅಂತನಾದ್ರೂ ಅಂದ್ಕೊಂಡಿರ್ಬೇಕು
ಅಂತ ಒಮ್ಮೆ ಅನಿಸಿದರೆ ಮತ್ತೊಮ್ಮೆ ಇಲ್ಲೆಲ್ಲೋ ಹೋಗುತ್ತಿದವ ಬಂದ, ತಿಳಿದದ್ದು ಮಾತಾಡಿದ ಹೋದ , ಸೋತೆ ಅಂತ ಹೇಳಿ ಹೊರಟೆ ಹೋದನಲ್ಲ ಸಂಬಧವಿದ್ದಿದ್ದರೆ ಹಾಗೆ ಹೋಗುತ್ತಿದ್ದನೇ ? ಅಂತ ಪೂರ್ತಿ ವಿರುಧ್ಧ ದಿಕ್ಕಿನಲ್ಲಿ ಮನಸು ಓಡುತ್ತಿತ್ತು.
ಕನಸೊಂದು ಈಡೇರದೆಂಬ ಸತ್ಯ ಬುಧ್ಧಿಗಿಂತಲೂ ಮೊದಲು ಮನಸ್ಸಿಗೆ ತಿಳಿಯುತ್ತದೆ.
ಜೊತೆಗೇ ಬೆಳೆದ ಅವನು ಕನಸೇ?
ಕೆಲವೊಮ್ಮೆ ಮನಸು ಅತ್ತ ಸ್ನೇಹವಲ್ಲದ ಇತ್ತ ಪ್ರೇಮವಲ್ಲದ ಒಂದು ನಡುವಿನ ಸಂಬಂಧವನ್ನ ಹುಡುಕುತಿರುತ್ತೆ .
ಹುಡುಗರಿಗೆ ತಾಯಿ, ಅಕ್ಕ -ತಂಗಿ , ಗೆಳತಿ ಎಲ್ಲವೂ ಆಗಬಲ್ಲ ಒಂದು ಬಂಧ ಆಪ್ತವಾಗತ್ತೆ.
ಅಂಥ ಒಂದು ಬಂಧವನ್ನ ಅವ ಅರಸಿದ್ದನೆ ?
ಪದವಿಗೆ ಬರುವ ಹೊತ್ತಿಗೆ ಒಬ್ಬ ಸಂಗಾತಿ ಇರುವುದು ಅಪರೂಪವಲ್ಲದಿದ್ದರೂ ಸಾಮಾನ್ಯವೂ ಆಗಿರದ ಕಾಲವದು. ಗೆಳತಿಯರು ಅವರ ಬಾಯ್ ಫ್ರೆಂಡ್ಗಳ ಬಗ್ಗೆ ಹೇಳಿದ್ದು ಕೇಳಿದಾಗ ನನಗೆ ಇವನ ನೆನಪಾಗುತ್ತಿರಲಿಲ್ಲ.
ಹಾಗಾದರೆ, ಹೆಣ್ಣಾದ ನಾನು ಹುಡುಕಿದ್ದು ಏನನ್ನು ? ಯಾವ ಹೆಸರಲ್ಲವನ ಕೂಗಲಿ?
ದಂಡಿಸಿ ಯಶೋಧೆಯಾಗಲಾರೆ , ಸಾಧಿಸಿ ಭಾಮೆಯಾಗಲಾರೆ .
ಮೀರಾ, ರಾಧೆಯರು ಕಥೆಯಲ್ಲಿ ಮಾತ್ರ ಚೆನ್ನ.
"ಯಶೋದನು ಕಾನುರ ನಿನ್ನು ದಂಡಿಂಚ
ಸತ್ಯನು ಕಾನುರ ನಿನ್ನು ಸಾದಿಂಚ
ಎವರು ನುವ್ವನಿ ನನ್ನು ಅಡಗಕು "
ಎವರು ಕಾನನಿ ವಿಡಚಿ ವೆಳ್ಳಕು....
ReplyDeleteಯಾಕೋ ಈವತ್ತು ಏನೇನೋ ನೆನಪುಗಳತ್ತು ಮನಸ್ಸು ಜಾರಿತು!!!
ತರಳೆಯ ಮನದಲ್ಲಿ ನಿಧಾನವಾಗಿ ಹರಿದುಬರುತ್ತಿರುವ ಪ್ರಣಯವಿಷಯವನ್ನು ನವಿರಾಗಿ ಚಿತ್ರಿಸುತ್ತಿದ್ದೀರಿ. ನಿಮ್ಮ ವರ್ಣನೆಗೆ ಕಾವ್ಯದ ಗುಣ ಬಂದಿದೆ.
ReplyDeleteಧನ್ಯವಾದಗಳು ಕಾಕಾ ಮತ್ತು ಬದರಿ ಸರ್ ರವರಿಗೆ
ReplyDelete