ದೂರದೊಂದು ತೀರದಿಂದ ಬಂದ ಪಾರಿಜಾತದ ಗಂಧ,
ಅವನ ಜೊತೆ ನನ್ನ ನಗುವನ್ನೂ ಕೊಂಡೊಯ್ದಿತ್ತು
**************************************
ವೈಣಿಕನಿಲ್ಲದೆ ಮಿಡಿವ ವೀಣೆಗೆ ಮನಸೆನ್ನುತ್ತಾರೆನೋ .....
ಗಾಯಕನಿಲ್ಲದೆ ಹಾಡುವ ಹಾಡಿಗೆ ನೋವೆನ್ನುತ್ತಾರೆನೋ
******************************************
ಕೃಷ್ಣ ಬರುತ್ತಾನೆಂದು ಬೆಣ್ಣೆ ಕಡೆದಿದ್ದೆ ಬಂತು
ಬೆಣ್ಣೆ ಬಂದರೂ ಚೋರ ಬರಲಿಲ್ಲ
******************************************
ನಾ ಅದೆಷ್ಟು ಹಾಡಿದೆ,
ಅದೆಷ್ಟು ಕುಣಿದೆ,
ಆ ಮುರಲಿಲೋಲನ ನೋಡಬೇಕೆಂದು,
ಅವ ಬರಲೇ ಇಲ್ಲ...
ಕಾರಣ....ನಾ ನನ್ನ ಮರೆತಿರಲಿಲ್ಲ
*********************************************
No comments:
Post a Comment