Monday, August 22, 2011

ಅನಾವರಣ - ೧

ಸೇತುರಾಂರ ಅನಾವರಣ ದ ಒಂದು ಸಂಭಾಷಣೆ ಹೀಗೆ ಸಾಗುತ್ತದೆ :
"ಬದುಕು ಮನಸಿಂದು ಅಲ್ಲ, ದೇಹದ್ದು ಅಲ್ಲ, ಎರಡು ಸೇರಿದ್ದು,
ದೇಹಕ್ಕೆ ಹಸಿವಾದರೆ, ಏನು ತಿನ್ನ ಬೇಕು , ಹೇಗೆ ತಿನ್ನ ಬೇಕೆಂಬುದನ್ನ ನಿರ್ಧರಿಸೋದು
ಮನಸು"
ನನ್ನಗನ್ನಿಸಿದ್ದು : 

ಹಸಿವಾದರೆ ಗೆಲ್ಲುವುದು ದೇಹ.  ದೇಹ ಸಾದಿಸದ ಮುನಿಸನ್ನು  ಪಾಪದ ಮನಸು ಸಾದಿಸುವುದೆನ್ತು ?
ಅದಕೆ ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ ಎಂದರೆನೋ?

ಮಗುವಿಗೆ ತಾಯಿ ಭೂತ ಆದರೆ ತಾಯಿಗೆ ಮಗುವೆ ಭವಿಷ್ಯ.
 ತಾಯಿ, ತಾನೇ ಜೀವ ಕೊಟ್ಟ ತನ್ನ ಭವಿಷ್ಯದ ಮೇಲೆ ಅದೇ ನ ಮುನಿದಾಳು?

ಅಣ್ಣ ತಮ್ಮ, ಸಭೆಯಲ್ಲಿ ಬೆನ್ನು ಕಟ್ಟಲು ಬೇಕಾದವರು.
ಅವರ ಮೇಲೆ ಮುನಿದೆನು ಫಲ?

ಅಕ್ಕ ತಂಗಿ ಕರುಳ ಬಳ್ಳಿಗಳು, ಅತ್ತು ಕರೆಯಲು, ಹೊತ್ತು ಕಳೆಯಲು ಅಕ್ಕ ತಂಗಿಗಿಂತ ಇನ್ಯಾರು ಹಿತ
ಅವರಿರುವಲ್ಲಿ ಮುನಿಸಿಗೆನು ಕೆಲಸ?

ಅಜ್ಜಿ ಅಜ್ಜ ಬದುಕಿನ ಕಥೆಗಳ ಮೂಟೆ.
ಕಥೆಮೇಲೆ ಮಕ್ಕಳು ಮುನಿದಾರೆಯೇ ?

ದೊಡ್ಡಮ್ಮ ಚಿಕ್ಕಮ್ಮ  ಸೋದರ ಮಾವ ಅಮ್ಮನ ಚೂರುಗಳು.
ಅವರ ಮೇಲೆ ಮುನಿಸೆ?

ದೊಡ್ಡಪ್ಪ ಚಿಕ್ಕಪ್ಪ ಅಪ್ಪನ ಅಂಥಕರಣದ ಪ್ರತಿರೂಪಗಳು
ಇನ್ನು ಮುನಿಸ್ಯಾಕೆ?

ಸೋದರತ್ತೆ ತವರ ಕಲ್ಲನ್ನೂ ಪ್ರೀತಿಸುವವಳು
ತವರ ಮಕ್ಕಳ ಮೇಲೆ ಮುನಿದಾಳೆಯೇ?

ಇಷ್ಟೆಲ್ಲಾ  ಅನುಬಂಧ ಇದ್ಯಾಗ್ಯೂ, ಎಷ್ಟೋ ಸಂಭಗಳು ಯುಗ ಯುಗಗಳಿಂದ ಒಡಕಲು ಬಿಂಬಗಳಾಗುತ್ತಲೇ ಇವೆ.








2 comments:

  1. ಅಕ್ಕ ಸಂಭಂದಗಳ ಅನಾವರಣ ಸೊಗಸಾಗಿ ಮಾಡಿರುವಿರಿ.ಮುನಿಸಿಗೂ ಅದರದೇ ಆದ ಅಂದವಿದೆ....ಅಂದದ ಮುನಿಸು ತುಟಿ ಅಂಚನ್ನು ಉಬ್ಬಿಸಿ ಸಾರ್ಥಕತೆ ಪಡೆಯುತ್ತೆ.ತುಂಬಾ ಹಿಡಿಸಿತು ಈ ಬರಹ.:-)

    ReplyDelete