೧. ಕಂಬನಿ ಇಂದ ಕಣ್ಣು ಮಂಜಾದಿತೇನೋ ,
ಮಂಜಾದ ಕಣ್ಣಲ್ಲಿ ಚೆಲುವ ಕಾಣಿಸಲಾರನೋ ಎಂದು, ಕಣ್ಣಿರ ಒತ್ತಿ ಹಿಡಿದು ಕುಂತಿದ್ದಾಳೆ ಚೆಲುವಿ.
ಅವ ಮರೆತ ದಾರಿಯನ್ನ ನೆನಪು ಮಾಡಿ ಕೊಡುವವರಾರು !
೨. ತುತ್ತಿಗಾಗಿ ಹೋರಾಡ ಬೇಕು
ಹಕ್ಕಿಗಾಗಿ ಹೋರಾಡ ಬೇಕು
ಉಸಿರಿರುವವರೆಗಿನ ಹೋರಾಟ ಬದುಕು
ಹಸಿವಿಗಾಗಿ ದುಡಿಯ ಬೇಕು
ಕಸುವಿಗಾಗಿ ದುಡಿಯಬೇಕು
ದಣಿಯುವವರೆಗಿನ ದುಡಿತ ಬದುಕು ನಲುಮೆಗಾಗಿ ಪ್ರೀತಿಸಬೇಕು
ನೆನಪಿಗಾಗಿ ಪ್ರೀತಿಸಬೇಕು
ಹೊರಡುವತನಕದ ಪ್ರೀತಿ ಬದುಕು
ಇದೆಲ್ಲದರಿಂದ ಮುಕ್ತವಾಗುವ ಸತ್ಯದ ಹುಡುಕಾಟವೂ ಬದುಕು !
ಚೆನ್ನಾಗಿದೆ !!!... "ಸತ್ಯದ ಹುಡುಕಾಟವು ಬದುಕು" ಎಂಬ ಸಾಲು ತುಂಬ ಹಿಡಿಸಿತು...
ReplyDeleteಧನ್ಯವಾದಗಳು
ReplyDelete