Wednesday, December 07, 2011

ಎರವಲು

೧.  ಸಾಗು ಮಾಗು ಗುರುಪಾದ
   ಸೇವಕ ನಾಗು ಹಾಗೂ ಹೀಗೂ
   ಮಂಗಾಟ ನಿಲ್ಲಿಸು ಹನುಮಂತನಾಗು

೨. ನಾನೆಲ್ಲಿ ಹೋಗಿದ್ದೆ?
  ನಿಮ್ಮ ಹೃದಯದೊಳಗಿದ್ದೆ
  ವಿವೇಕ ಅಂತ ಹೊರಗ ಬಂದೆ

೩.  ಯಾವುದರ ಬೋಧ ಇಲ್ಲವೋ
   ಅದರ ಶೋಧವು
   ಸಫಲವೆನಿಸಲಾರದು

೪ ಕಾಮದೊಳಗೆ ಹೊತ್ತಿದೆ ಪ್ರೇಮಾ
ಅದಕ್ಕಾವ ನೇಮಾ ಗೀಮಾ
ಅದು ಬಾಳೋ ಸೀಮಾ ನಿತ್ಯಾನಂದ ಧಾಮಾ

- ದ. ರಾ. ಬೇಂದ್ರೆ.
ಕೃಪೆ: ಶಬ್ದಗಾರುಡಿಗ ಬೇಂದ್ರೆಯವರ ಮೂರು-ಮೂರೇ ಸಾಲುಗಳು

೫.ಹೊಗಳಲೇನು?
ತೆಗಳಲೇನು?
ಲೋಕ ತೊರೆದು ಬಿಟ್ಟರೇನು? ಕೊಟ್ಟ ಕೊನೆಗೆ
ಬರಲು ಮನೆಗೆ.
ನಿನಗೆ ನಾನು.
ನನಗೆ ನೀನು..
-
ರಸಋಷಿ ಕುವೆಂಪು

5 comments:

  1. ಬೇಂದ್ರೆಯವರ ನುಡಿಮುತ್ತುಗಳನ್ನು ನಮಗೂ ತೋರಿದ ನಿಮಗೆ ಧನ್ಯವಾದಗಳು.

    ReplyDelete
  2. ನನ್ನ ಬ್ಲಾಗಿಗೆ ಬಂದು ಕವನ ಓದಿದ್ದಕ್ಕಾಗಿ ಧನ್ಯವಾದಗಳು ಮೇಡಂ.

    ಎರವಲು,
    ಹಿರಿಯ ಕವಿವರ್ಯರ ಒಂದೊಂದು ಸಾಲೂ ಗೀತಾಮೃತವೇ! ಪೋಣಿಸಿಕೊಟ್ಟ ನಿಮ್ಮ ಪ್ರೀತಿಗೆ ನನ್ನ ಶರಣು!

    ನನ್ನ 2ನೇ ಬ್ಲಾಗು:
    www.badari-notes.blogspot.com

    ReplyDelete
  3. ಇದೆಲ್ಲ ನಿಮಗೆ ಗೊತ್ತಿರುವುದೇ ಸರ್,
    ಮತ್ತೆ ಮತ್ತೆ ನಾನು ಓದಲು ಇಲ್ಲಿ ಹಾಕಿದ್ದೇನೆ :)
    ಧನ್ಯವಾದಗಳು

    ReplyDelete
  4. ಬದರಿನಾಥ್ ಅವರೇ , ಒಳ್ಳೆ ಕವನ ಬರೆದಿದ್ದೀರಿ
    ನಿಮ್ಮ ಇನ್ನೊಂದು ಬ್ಲಾಗನ್ನೂ ನೋಡಿದ್ದೇನೆ :)
    ಧನ್ಯವಾದಗಳು

    ReplyDelete
  5. ಸ್ವರ್ಣ...ನುಡಿಮುತ್ತುಗಳು ನಿಜಕ್ಕೂ ಅಮೂಲ್ಯ..ಅದರಲ್ಲೂ ವರಕವಿ ಮತ್ತು ರಾಷ್ಟ್ರಕವಿಗಳ ಅಮೂಲ್ಯ ಸಾಲುಗಳು. ಧನ್ಯವಾದ

    ReplyDelete