೧. ಆ ಸುಡುಗಾಡು ಲೇಖಕಿಗದೇನೋ, ಒಂದೇ ನೋವು
ಅದೆಂಥದೋ ನಾಲ್ಕು ಸಾಲು ಬರೆದಳು
ಕವಿತೆ ಅಂದಳು !
ಅದೆಂತದೋ ಒಂದೆರಡು ಪುಟ ಬರೆದಳು
ಕಥೆ (ವ್ಯಥೆ?) ಅಂದಳು !
ಅದ್ಯಾರೋ ಇವಳ ತಧ್ಧಿಮಿ ಗೆ ತಾಧಿಮಿ ಅಂದು
ಇವಳು ಬರೆದ ತಿಕ್ಕಲಿಗೆ, ಅರ್ಥ ಕೊಡುವ ಪ್ರಯತ್ನ ಪಟ್ಟರು
ವಿಮರ್ಶೆ ಅಂದರು !
ಅಷ್ಟೆಲ್ಲ ಬರೆದೂ, ಅತ್ತೂ ಇನ್ನು ಆ ಮನೆಇಂದ ಬಿಕ್ಕಳಿಕೆ ನಿಂತಿಲ್ಲ !
೨ ಚಿಪ್ಪುಗಳ ತರಲು ತೆರಳಿದ್ದೆ ತೀರಕ್ಕೆ
ತೀರದ ವಿಳಾಸ ಬದಲಾಗಿದ್ದನ್ನು ನನಗಾರು ಹೇಳಲೇ ಇಲ್ಲ !
೩ ಬರೆದ ಅಕ್ಷರಗಳಿಗೆಲ್ಲ ನೂರು ವಿವರಣೆ
ಅವಳಿಗೋ ಕಾಣದ ಭಾವಗಳದ್ದೆ ಭವಣೆ!
೪ ಪೋಣಿಸದೆ ಚಲ್ಲಾಪಿಲ್ಲಿಯಾಗಿವೆ ನೂರು ಮುತ್ತುಗಳು
ಸಾಯಲಿ, ಮುತ್ತುಗಳಿಗೇಕೆ ದಾರದ ಬಂಧನ !
ಅದೆಂಥದೋ ನಾಲ್ಕು ಸಾಲು ಬರೆದಳು
ಕವಿತೆ ಅಂದಳು !
ಅದೆಂತದೋ ಒಂದೆರಡು ಪುಟ ಬರೆದಳು
ಕಥೆ (ವ್ಯಥೆ?) ಅಂದಳು !
ಅದ್ಯಾರೋ ಇವಳ ತಧ್ಧಿಮಿ ಗೆ ತಾಧಿಮಿ ಅಂದು
ಇವಳು ಬರೆದ ತಿಕ್ಕಲಿಗೆ, ಅರ್ಥ ಕೊಡುವ ಪ್ರಯತ್ನ ಪಟ್ಟರು
ವಿಮರ್ಶೆ ಅಂದರು !
ಅಷ್ಟೆಲ್ಲ ಬರೆದೂ, ಅತ್ತೂ ಇನ್ನು ಆ ಮನೆಇಂದ ಬಿಕ್ಕಳಿಕೆ ನಿಂತಿಲ್ಲ !
೨ ಚಿಪ್ಪುಗಳ ತರಲು ತೆರಳಿದ್ದೆ ತೀರಕ್ಕೆ
ತೀರದ ವಿಳಾಸ ಬದಲಾಗಿದ್ದನ್ನು ನನಗಾರು ಹೇಳಲೇ ಇಲ್ಲ !
೩ ಬರೆದ ಅಕ್ಷರಗಳಿಗೆಲ್ಲ ನೂರು ವಿವರಣೆ
ಅವಳಿಗೋ ಕಾಣದ ಭಾವಗಳದ್ದೆ ಭವಣೆ!
೪ ಪೋಣಿಸದೆ ಚಲ್ಲಾಪಿಲ್ಲಿಯಾಗಿವೆ ನೂರು ಮುತ್ತುಗಳು
ಸಾಯಲಿ, ಮುತ್ತುಗಳಿಗೇಕೆ ದಾರದ ಬಂಧನ !
ಚೆಲ್ಲಾಪಿಲ್ಲಿಯಾಗಿ ಬಿದ್ದ ಈ ಕವನ-ಮುತ್ತುಗಳ ಚೆಲುವಿಗೆ ಖುಶಿ ಪಡುವ ರಸಿಕರಿದ್ದಾರೆ! ಸುಭಾನ ಅಲ್ಲಾಹ್!!
ReplyDeleteಪಬ್ಲಿಶ್ ಮಾಡಿದ ಮೇಲೆ ಮಾದಬರದಿತ್ತೇನೋ ಅನಿಸಿತ್ತು ಸರ್ ..
ReplyDeleteಧನ್ಯವಾದಗಳು
ಸಾಯಲಿ, ಮುತ್ತುಗಳಿಗೇಕೆ ದಾರದ ಬಂಧನ !
ReplyDeleteಹೌದದು....
ಚಂದ !! ಚಂದ ನೋಡಿ...... ಚಂದವಾದದ್ದೆಲ್ಲಾ ನಮ್ ಸೆರೆಯಲ್ಲಿರಬೇಕು ಅನ್ನೋದು ಮನುಷ್ಯನ ಪಾಲಸಿ....
ಗಿಳಿ ಪಂಜರದಿಂದ ಹಾರಿ ಹೋದ್ರೆ ಹಾರಿ ಹೋಯ್ತಲ್ಲಾ ಅಂತ ಬೇಜಾರ್ ಮಾಡ್ಕೋತೆವೆ.....
ಅಬ್ಬಾ ಸ್ವತಂತ್ರವಾಯ್ತಲ್ಲಾ ಅಂತ ಯಾರನ್ತಾರೆ ಹೇಳಿ.....
ಚನ್ನಾಗಿದೆ.
ನಿಮ್ಮ ಬಳಕೆಯ ಹೆಸರು ಚೆನ್ನಾಗಿದೆ.
ReplyDeleteಧನ್ಯವಾದಗಳು