ಏನೋ ಲೇಖಕರ ಸಂತೆ ಸೇರಿತ್ತು ಅಲ್ಲಿ
ಘಟಾನುಘಟಿಗಳೆಲ್ಲ ಅಲ್ಲಿದ್ದರು
ಒಂದೊಮ್ಮೆ, ನನಗೂ ಕನಸಿತ್ತು
ಬರೆಯಬೇಕು
ಅದ ಯಾರೋ ಓದಬೇಕು
ಮೆಚ್ಚಬೇಕು
ಅದರೊಟ್ಟಿಗೆ ಮರುಗಬೇಕು, ಕೊರಗಬೇಕು
ಕುಣಿಯಬೇಕು
ಈಗ್ಯಾಕೋ, ಆ ಕನಸು ಮಾಯವಾಗಿದೆ
ಬಹುಶ ನನ್ನ ಸಾಮರ್ಥ್ಯ ನನಗೆ ಕಂಡಿದೆ :)
ಬರೆದಿದ್ದನ್ನೆಲ್ಲ ಯಾಕೆ ಯಾರಾರ
ಓದಬೇಕು?
ಹಾಗೆ ಹೀಗೆ ಗೀಚಿದ ಸಾಲುಗಳ ಯಾಕೆ
ಮೆಚ್ಚಬೇಕು?
ರಾಗ ತಾಳಗಳಿಲ್ಲದ ಪದಕ್ಕೆ ಯಾಕೆ
ಕುಣಿಯಬೇಕು?
ಅದ್ಹೇಗೋ, ಸತ್ಯ ಅರ್ಥವಾಗಿದೆ
ಬಹುಶ ನನಗೂ ಸ್ವಲ್ಪ ಬೆಳಕು ಕಂಡಿದೆ :)
ಯಾರೋ ನೋಡದ ಕಾಡಲ್ಲೂ ಮಲ್ಲಿಗೆಯೊಂದು
ಅರಳುತ್ತೆ
ಯಾರೂ ಕೇಳದ ಹಾಡನ್ನೂ ಕೋಗಿಲೆಯೊಂದು ತನ್ಮಯಳಾಗೆ
ಹಾಡತ್ತೆ
ಯಾರೂ ನೋಡದ ಚಿತ್ರವನ್ನೂ ಸಂಜೆ ಕೆಂಪು ಚೆಂದದಿಂದಲೇ
ಮಾಡತ್ತೆ
ಇನ್ನೂ, ಮಾನಸ ಗಂಗೆಯಲ್ಲಿ ಬಹಳಷ್ಟು ಕೊಳೆ ಇದೆ
ತೊಳೆಯಲಿನ್ನೂ ಸಾಕಷ್ಟು ರಾಡಿ ಇದೆ
ಘಟಾನುಘಟಿಗಳೆಲ್ಲ ಅಲ್ಲಿದ್ದರು
ಒಂದೊಮ್ಮೆ, ನನಗೂ ಕನಸಿತ್ತು
ಬರೆಯಬೇಕು
ಅದ ಯಾರೋ ಓದಬೇಕು
ಮೆಚ್ಚಬೇಕು
ಅದರೊಟ್ಟಿಗೆ ಮರುಗಬೇಕು, ಕೊರಗಬೇಕು
ಕುಣಿಯಬೇಕು
ಈಗ್ಯಾಕೋ, ಆ ಕನಸು ಮಾಯವಾಗಿದೆ
ಬಹುಶ ನನ್ನ ಸಾಮರ್ಥ್ಯ ನನಗೆ ಕಂಡಿದೆ :)
ಬರೆದಿದ್ದನ್ನೆಲ್ಲ ಯಾಕೆ ಯಾರಾರ
ಓದಬೇಕು?
ಹಾಗೆ ಹೀಗೆ ಗೀಚಿದ ಸಾಲುಗಳ ಯಾಕೆ
ಮೆಚ್ಚಬೇಕು?
ರಾಗ ತಾಳಗಳಿಲ್ಲದ ಪದಕ್ಕೆ ಯಾಕೆ
ಕುಣಿಯಬೇಕು?
ಅದ್ಹೇಗೋ, ಸತ್ಯ ಅರ್ಥವಾಗಿದೆ
ಬಹುಶ ನನಗೂ ಸ್ವಲ್ಪ ಬೆಳಕು ಕಂಡಿದೆ :)
ಯಾರೋ ನೋಡದ ಕಾಡಲ್ಲೂ ಮಲ್ಲಿಗೆಯೊಂದು
ಅರಳುತ್ತೆ
ಯಾರೂ ಕೇಳದ ಹಾಡನ್ನೂ ಕೋಗಿಲೆಯೊಂದು ತನ್ಮಯಳಾಗೆ
ಹಾಡತ್ತೆ
ಯಾರೂ ನೋಡದ ಚಿತ್ರವನ್ನೂ ಸಂಜೆ ಕೆಂಪು ಚೆಂದದಿಂದಲೇ
ಮಾಡತ್ತೆ
ಇನ್ನೂ, ಮಾನಸ ಗಂಗೆಯಲ್ಲಿ ಬಹಳಷ್ಟು ಕೊಳೆ ಇದೆ
ತೊಳೆಯಲಿನ್ನೂ ಸಾಕಷ್ಟು ರಾಡಿ ಇದೆ
ಸ್ವಾಂತಃಸುಖಾಯ!
ReplyDelete